ಪುಟ್ಟನ ಸಾಹಸ

ಪುಟ್ಟನು ಶಾಲೆಯಿಂದ
ಮನೆಗೆ ಓಡಿ ಬಂದ

ಪುಸ್ತಕದ ಚೀಲವನಿಟ್ಟು
ಹಿಡಿದನು ಕ್ರಿಕೆಟ್ಟು ಬ್ಯಾಟು
ಕಿಟ್ಟುವನ್ನು ಕೂಗಿ ಕರೆದ
ಮೈದಾನದ ಕಡೆಗೆ ನಡೆದ

ಮನದಣಿ ಆಟವನಾಡಿ
ಮತ್ತೆ ಇಬ್ಬರು ಜೊತೆಗೂಡಿ
ಬೀದಿಯಲ್ಲಿ ಬರುತಿರಲು
ಹರಡಿತ್ತು ನಸುಗತ್ತಲು

ಬೀದಿಯ ನಾಯಿಯೊಂದು
ಇವರನು ಕಚ್ಚಲಿಕೆಂದು
ಓಡಿ ಬಂದಿತು ಇವರತ್ತ
ಕಿಟ್ಟು ಅಲ್ಲಿಂದ ಕಂಬಿ ಕಿತ್ತ

ಮುಟ್ಟುಗೆ ಹೆದರಿಕೆಯಾಯ್ತು
ಹಂಚಿಕೆಯೊಂದು ಹೊಳೆಯಿತು
ಬೇಗನೆ ಶರ್ಟನು ಬಿಚ್ಚಿದನು
ಬಲಗೈಯಿಗೆ ಸುತ್ತಿಕೊಂಡನು

ಮಂಡೆಯೂರುತ ಕುಳಿತನು
ಬಲಗೈ ಬಾಯಿಗೆ ಕೊಟ್ಟನು
ಕಚ್ಚಲು ಆಗದ ನಾಯಿಯು
ಕಿಟ್ಟು ಬಿಟ್ಟು ಓಡೋಯ್ತು

ಪುಟ್ಟು ಬುದ್ಧಿಯ ನೋಡಿದ ಜನ
ಕೊಟ್ಟರು ಶಹಾಭಾಶ್‌ಗಿರಿಯನ್ನು
ಪುಟ್ಟ ಕಿಟ್ಟು ಹತ್ತಿರ ಬಂದನು
ಸಾರಿ ಕಿಟ್ಟು ಎಂದೆಂದನು

ಜೀವದ ಗೆಳೆಯ ನೀನಲ್ಲ
ನಿನ್ನ ಸಹವಾಸ ಬೇಕಿಲ್ಲ
ಕಿಟ್ಟು ಕೋಪದಿ ನುಡಿದನು
ತನ್ನ ಮನೆಯನ್ನು ಸೇರಿದನು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಣ್ಣಿನ ಒಲವು
Next post ಕರ್‍ನಾಟಕದ ಹೋರಾಟಗಳು ಮತ್ತು ಮುಸ್ಲಿಮರು

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

cheap jordans|wholesale air max|wholesale jordans|wholesale jewelry|wholesale jerseys